ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷ ದಿಗ್ಗಜನ ಸಾಧನೆ ದಾಖಲಿಸುವ ಕಾರ್ಯವಾಗಲಿ

ಲೇಖಕರು : ವಿಜಯ ಕರ್ನಾಟಕ
ಗುರುವಾರ, ನವ೦ಬರ್ 12 , 2015
ನವ೦ಬರ್ 12, 2015

ಯಕ್ಷ ದಿಗ್ಗಜನ ಸಾಧನೆ ದಾಖಲಿಸುವ ಕಾರ್ಯವಾಗಲಿ

ಹೊನ್ನಾವರ : ಯಕ್ಷಗಾನ ಇತಿಹಾಸದಲ್ಲಿಯೇ ಪರಿಪೂರ್ಣ ಕಲಾವಿದರಾಗಿರುವ ಡಾ. ಮಹಾಬಲ ಹೆಗಡೆಯವರ ಸಾಧನೆ ದಾಖಲಿಸುವ ಕಾರ್ಯ ಆಗಬೇಕು ಎಂದು ಯಕ್ಷಗಾನ ತಜ್ಞ ಮತ್ತು ಸಂಶೋಧಕ ಮೆಸೂರಿನ ಡಾ. ಕಬ್ಬಿನಾಲೇ ವಸಂತ ಭಾರದ್ವಜ ಹೇಳಿದರು.

ತಾಲೂಕಿನ ಗುಣವಂತೆಯ ಕೆರೆಮೆನೆಯ ಶಿವರಾಮ ಹೆಗಡೆ ರಂಗಮಂದಿರದಲ್ಲಿ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಆರನೇ ವಾರ್ಷಿಕ ಸಂಸ್ಮರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವ್ಯಕ್ತಿಯು ಸಮಾಜಮುಖಿಯಾಗಿ ಕೊಡುಗೆ ನೀಡಿದ ವ್ಯಕ್ತಿತ್ವವನ್ನು ಚಿತ್ತ ಭಿತ್ತಿಗೆ ತಂದು ದಿವ್ಯತೆಯನ್ನು ಅನುಭವಿಸಿ, ದಾಖಲಿಸುವ ಕಾರ್ಯ ಸಂಸ್ಮರಣೆಯ ಉದ್ದೇಶವಾಗಿರಬೇಕು ಎಂದರು.

ಡಾ. ಮಹಾಬಲ ಹೆಗಡೆಯವರ ಸಜನಶೀಲತೆ ಮತ್ತು ಅಧ್ಯಯನಶೀಲತೆಯಲ್ಲಿ ಸದಾ ಬಾಲಕನ ಕುತೂಹಲ ಇರುತ್ತಿತ್ತು. ರಂಗಭೂಮಿಯ ಕಥಾ ಸಾಂದರ್ಭಿಕ ಸ್ಥಿತಿಯಲ್ಲಿ ಸ್ಥಾಯಿಯಿಂದ ರಸಾನುಭವ ಸ್ಥಿತಿಗೆ ಪಾತ್ರವನ್ನು ಕೊಂಡೊಯ್ಯುತ್ತ ಪರಕಾಯ ಪ್ರವೇಶ ಪಡೆಯಲು ಸ್ವತಃ ಭಾಗವತಿಕೆ ಮಾಡುತ್ತಿದ್ದರು ಎಂದು ಸ್ಮರಿಸಿದರು.

ವೈದ್ಯ ಡಾ. ಭಾಸ್ಕರಾನಂದ ಕುಮಾರ ಮಾತನಾಡಿ ಶುತಿಜ್ಞಾನ, ಲ ಜ್ಞಾನ ಮತ್ತು ಯಕ್ಷಗಾನ ಪಾತ್ರಕ್ಕೆ ಬೇಕಾದ ದೇಹ ವೆಖರಿ ದೆವದತ್ತವಾಗಿ ಡಾ. ಮಹಾಬಲ ಹೆಗಡೆಯವರಿಗೆ ಸಂದಿತ್ತು. ಪಾತ್ರ ಗಾಂಭಿರ್ಯದಲ್ಲಿ ಪಾರಂಪರಿಕತೆಯನ್ನು ಉಳಿಸಿಕೊಳ್ಳುತ್ತಾ ಕೀಚಕ, ಕೌರವ, ಅಶ್ವತ್ಥಾಮ, ದುಷ್ಟಬುದ್ಧಿ ಹೀಗೆ ಅನೇಕ ಪಾತ್ರಗಳಿಗೆ ತನ್ನದೇ ಸಜನಶೀಲತೆಯಲ್ಲಿ ಜೀವ ತುಂಬಿದರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಲಕ್ಷ್ಮೀನಾರಾಯಣ ಶಾಸ್ತ್ರಿ ಮಾತನಾಡಿ ಅಪ್ರಿಯವಾದ ಸತ್ಯವನ್ನು ಪ್ರತಿಪಾದಿಸುವ ಯಕ್ಷಗಾನದ ಪರಂಪರೆಯನ್ನು ಕಾಯ್ದುಕೊಂಡು, ತನ್ನತನವನ್ನು ಉಳಿಸಿಕೊಂಡು, ಯಕ್ಷಗಾನದ ಭೀಷ್ಮನಾಗಿ ಮೆರೆದವರು ಡಾ. ಮಹಾಬಲ ಹೆಗಡೆಯವರು ಎಂದರು.

ಯಕ್ಷಗಾನ ಭಾಗವತ ಸುಬ್ರಾಯ ಭಾಗವತರನ್ನು ಸನ್ಮಾನಿಸಲಾಯಿತು.

ನಂತರ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಭಸ್ಮಾಸುರ ಮೋಹಿನಿ ಯಕ್ಷಗಾನದಲ್ಲಿ ಭಸ್ಮಾಸುರನಾಗಿ ಬೆಂಗಳೂರಿನ ಮಯೂರಿ ಉಪಾಧ್ಯಾಯ, ಮೋಹಿನಿಯಾಗಿ ಗೋಳಿಕೊಪ್ಪದ ನಿರ್ಮಲಾ ಹೆಗಡೆ ಪಾತ್ರ ನಿರ್ವಹಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲಕಷ್ಣ ಭಟ್ಟ ಜೋಗಿಮನೆ, ಮದ್ದಲೆ ವಾದಕರಾಗಿ ಪಿ.ಕೆ. ಹೆಗಡೆ, ಹರಿಕೇರಿ ಮತ್ತು ಚಂಡೆ ವಾದಕರಾಗಿ ಇಡಗುಂಜಿಯ ಕಷ್ಣ ಯಾಜಿ ಸಾಥ್ ನೀಡಿದರು.

ದುಷ್ಟಬುದ್ಧಿಯ ಪಾತ್ರದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರಾಮ ಹೆಗಡೆ ಕೆರೆಮನೆ, ಮದನನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ವಿಷಯೆಯಾಗಿ ಕೆರೆಮನೆ ಶಿವರಾಮ ಹೆಗಡೆ, ಚಂದ್ರಹಾಸನಾಗಿ ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ, ಕುಳಿಂದನಾಗಿ ಮಂಜು ಹಕ್ಕಲಕೇರಿ, ಪುರೋಹಿತನಾಗಿ ಸೀತಾರಾಮ ಹೆಗಡೆ ಮುಡಾರೆ, ಕಟುಕನಾಗಿ ಬೇರಂಕಿ ಜಿ. ಎನ್. ಹೆಗಡೆ, ದೇವಿಯಾಗಿ ಶ್ರೀಧರ ಹೆಗಡೆ ಕೆರೆಮನೆ ಪಾತ್ರ ನಿರ್ವಹಿಸಿದರು.

ಉಡುಪಿ ಯಕ್ಷಗಾನ ಕೇಂದ್ರದ ಸಂಜೀವ ಸುವರ್ಣ, ಯಕ್ಷಗಾನ ಭಾಗವತ ಹರಿಕಷ್ಣ ಹೊಳ್ಳ, ಮುದ್ಗಣ ಪ್ರಕಾಶನದ ನಂದಳಿಕೆ ಬಾಲಚಂದ್ರರಾವ್, ಹಿರಿಯ ಕಲಾವಿದ ಮಣ್ಣಿಗೆ ತಿಮ್ಮಣ್ಣ ಯಾಜಿ, ಯಕ್ಷರಂಗ ಸಂಪಾದಕ ಗೋಪಾಲಕಷ್ಣ ಭಾಗವತ, ಯಕ್ಷಕರ್ಮಿ ಎಂ.ಆರ್. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಎಮ್.ಎಸ್. ಹೆಗಡೆ ಗುಣವಂತೆ ಮತ್ತು ಎಲ್.ಎಮ್. ಹೆಗಡೆ ಕೆರೆಮನೆ ನಿರೂಪಿಸಿದರು.

ಕೃಪೆ : vijaykarnataka

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ